ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಗುಸುಗುಸು: ಚಿತ್ರತಂಡದ ವಿರುದ್ಧ ಅಂಬರೀಶ್ ಮುನಿಸು | Filmibeat Kannada

  • 6 years ago
ದರ್ಶನ್ ಅಭಿನಯದ ಬಿಗ್ ಬಜೆಟ್ ಚಿತ್ರ 'ಕುರುಕ್ಷೇತ್ರ'. 3Dಯಲ್ಲಿ ಚಿತ್ರೀಕರಣವಾಗುತ್ತಿರುವ ಈ ಚಿತ್ರದ ಸೆಟ್ ನಿಂದ 'ಗುಸುಗುಸು-ಪಿಸುಪಿಸು' ಅಂತ ಮಾತನಾಡುವಂತಹ ಸುದ್ದಿ ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಮೊದಲಿಗೆ ಫೀಚರ್ ಸಿನಿಮಾ ಮಾಡಲು ಮಾತ್ರ ಪ್ಲಾನ್ ಮಾಡಿದ್ದ ಸಿನಿಮಾ ತಂಡ ಕೆಲ ದಿನಗಳ ನಂತ್ರ 3Dಯಲ್ಲಿ ಚಿತ್ರೀಕರಿಸುವುದಕ್ಕೆ ಪ್ಲಾನ್ ಮಾಡ್ತು. ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದ ಪ್ರತಿ ಕಲಾವಿದರೂ ಎರಡೆರಡು ಬಾರಿ ಚಿತ್ರೀಕರಣದಲ್ಲಿ ಭಾಗಿಯಾಗುವಂತಾಯ್ತು. ಇದೇ ಕಾರಣದಿಂದ ಕೆಲ ಕಲಾವಿದರು ಸಿಟ್ಟಾಗಿದ್ದಾರಂತೆ. ಅದ್ರಲ್ಲಿ ಅಂಬರೀಶ್ ಕೂಡ ಒಬ್ಬರು.! ಮುಂದೆ ಓದಿರಿ,3D' ಸಿನಿಮಾದ ಚಿತ್ರೀಕರಣ ಆದ್ದರಿಂದ ಕೆಲ ಸೀನ್ ಗಳನ್ನ ಎರಡು ಬಾರಿ ಚಿತ್ರೀಕರಿಸಬೇಕಾಯ್ತಂತೆ. ಈ ಸಂದರ್ಭದಲ್ಲಿ ಅಂಬಿ, ನಿರ್ದೇಶಕ ಮತ್ತು ನಿರ್ಮಾಪಕರ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವೈಡ್ ಶಾಟ್ ನಲ್ಲಿ ಅಂಬಿ ಪಾತ್ರಕ್ಕೆ ಡ್ಯೂಪ್ ಹಾಕಿಸಲಾಗಿದೆ.ಕುರುಕ್ಷೇತ್ರ' ಸಿನಿಮಾಗಾಗಿ ಚಿತ್ರೀಕರಿಸಿದ್ದ ಸೀನ್ ಗಳನ್ನ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಅರ್ಜುನ್ ಸರ್ಜಾ ನೋಡಿದ್ದಾರೆ. ಕೆಲ ಸೀನ್ ಗಳು ಇನ್ನೂ ಚೆನ್ನಾಗಿ ಬರಬೇಕೆಂದು ಇಬ್ಬರೂ ಅಭಿಪ್ರಾಯ ಪಟ್ಟು, ಮರು ಚಿತ್ರೀಕರಿಸುವಂತೆ ಸಲಹೆ ನೀಡಿದ್ದಾರೆ. ಈ ಮಾತು ಅಂಬಿ ಕಿವಿಗೆ ಬಿದ್ದಿದ್ದೇ ತಡ ಮೇಕಪ್ ತೆಗೆದು ಸೆಟ್ ನಿಂದ ಹೊರಬಂದಿದ್ರಂತೆ. ಇದರಿಂದ ನಿರ್ದೇಶಕರ ಮೇಲೆ ನಿರ್ಮಾಪಕರಾದ ಮುನಿರತ್ನ ಗರಂ ಆಗಿದ್ದಾರೆ.
kurukshethra movie is a one of the biggest budget cinema,There are so many senior artists working there,For a small reason ambi has Anger with there workers , watch this video

Recommended