Sankranti Festival 2019 : ಸಂಕ್ರಾಂತಿ ಹಬ್ಬದ ದಾನ ವೈಶಿಷ್ಟ್ಯ, ಪಿತೃ ದೋಷ ನಿವಾರಣೆಯ ದಾರಿ | Oneindia Kannada

  • 5 years ago
ಇಂದಿನ ಲೇಖನದಲ್ಲಿ ಸಂಕ್ರಾಂತಿ ಹಬ್ಬದ ವಿಶೇಷಗಳನ್ನು ತಿಳಿದುಕೊಳ್ಳೋಣ. ನವಗ್ರಹಗಳ ನಾಯಕ ಎಂದು ಕರೆಸಿಕೊಳ್ಳುವ ರವಿಯು ತನ್ನ ಪಥವನ್ನು ಬದಲಿಸಿಕೊಳ್ಳುವ, ಧನುಸ್ಸು ರಾಶಿಯಿಂದ ಮಕರಕ್ಕೆ ಪ್ರವೇಶ ಮಾಡುವ ಪರ್ವ-ಪುಣ್ಯ ಕಾಲವಿದು. ಜನವರಿ 15ನೇ ತಾರೀಕಿನ ಮಂಗಳವಾರ ಈ ಬಾರಿಯ ಸಂಕ್ರಾಂತಿ ಹಬ್ಬವಿದೆ. ಉತ್ತರಾಯಣದ ಆರಂಭ ಕಾಲವಾದ ಸಂಕ್ರಾಂತಿ ಪರ್ವ ದಿನವು ಮುಂದಿನ ಆರು ತಿಂಗಳ ಹಲವು ಶುಭ ಕಾರ್ಯಗಳಿಗೆ ಮುನ್ನುಡಿ ಬರೆಯಲಿದೆ. ಅಷ್ಟೇ ಅಲ್ಲ, ಇದು ಸ್ವರ್ಗದ ಬಾಗಿಲು ತೆಗೆಯುವಂಥ ಸಮಯ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿ ಇದೆ. ಇಷ್ಟೆಲ್ಲ ಮಹತ್ವ ಇರುವ ಹಬ್ಬವನ್ನು ಹಾಗೂ ದಿನವನ್ನು ನಾವು ಹೇಗೆ ಎದುರುಗೊಳ್ಳಬೇಕು ಎಂಬ ಪ್ರಶ್ನೆ ಇರುತ್ತದೆ.