Bellary By-elections 2018 : ಜನಾರ್ಧನ ರೆಡ್ಡಿಗೆ ಓಪನ್ ಚಾಲೆಂಜ್ ಹಾಕಿದ ಸಿದ್ದರಾಮಯ್ಯ | Oneindia Kannada
  • 5 years ago
Bellary by election: Former Chief Minister counter made open challenge to Gali Janardhan Reddy to discuss on Mining corruption.

ಬಳ್ಳಾರಿ ಲೋಕಸಭೆ ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯ ಮತ್ತು ಜನಾರ್ದನ ರೆಡ್ಡಿ ನಡುವಣ ಕದನ ತಾರಕಕ್ಕೇರುವ ಸೂಚನೆ ಕಂಡುಬಂದಿದೆ. ರಾಜಕೀಯವಾಗಿ ಬಹಿರಂಗ ಚಟುವಟಿಕೆಗಳಿಂದ ದೂರವಿದ್ದ ಜನಾರ್ದನ ರೆಡ್ಡಿ, ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ನೇರ ಅಖಾಡಕ್ಕೆ ಇಳಿಯುವ ಸೂಚನೆ ನೀಡಿದ್ದರು. ಸಿದ್ದರಾಮಯ್ಯ ಅವರಿಂದಲೇ ತಾವು ಜೈಲಿನಲ್ಲಿ ಅನ್ಯಾಯವಾಗಿ ನಾಲ್ಕು ವರ್ಷ ಕಳೆಯುವಂತಾಯಿತು ಎಂದು ಅಲವತ್ತುಕೊಂಡಿದ್ದರು. ಸರಣಿ ಟ್ವೀಟ್‌ಗಳನ್ನು ಮಾಡಿರುವ ಸಿದ್ದರಾಮಯ್ಯ, ಗಣಿ ಅವ್ಯವಹಾರದ ಕುರಿತು ಬಹಿರಂಗ ಚರ್ಚೆಗೆ ಬರಲು ಸಿದ್ಧ. ನಿಮಗೆ ಪ್ರವೇಶಕ್ಕೆ ಅನುಮತಿ ಇರುವ ಸ್ಥಳದಲ್ಲಿಯೇ ಚರ್ಚೆಗೆ ಬನ್ನಿ ಎಂದು ವ್ಯಂಗ್ಯದ ದಾಟಿಯಲ್ಲಿ ಸವಾಲು ಹಾಕಿದ್ದಾರೆ.
Recommended