ಮತ ಸೆಳೆಯಲು ಬಿಜೆಪಿ ಮತ್ತೊಂದು ಮಾಸ್ಟರ್ ಪ್ಲಾನ್ | ಫೆಬ್ರವರಿ 10ರಿಂದ ಸ್ಲಂ ವಾಸ್ತವ್ಯ | Oneindia Kannada
- 6 years ago
ಪರಿವರ್ತನಾ ರ್ಯಾಲಿ ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆದುಕೊಂಡ ಖುಷಿಯಲ್ಲಿರುವ ಬಿಜೆಪಿ ನಾಯಕರು, ಮತ ಸೆಳೆಯಲು ಇನ್ನೊಂದು ಸುತ್ತಿನ ಪ್ಲ್ಯಾನಿಗೆ ಸಜ್ಜಾಗಿದ್ದಾರೆ. ಚುನಾವಣಾ ಕಾಲೇ, ಬಹುಕೃತ ವೇಷಂ!! ದಲಿತರ ಮನೆಯಲ್ಲಿ ಭೋಜನ ಸವಿದ ನಂತರ, ಬಿಜೆಪಿ ನಾಯಕರ ಮುಂದಿನ ಹೆಜ್ಜೆ, ಸ್ಲಂ ನಿವಾಸಿಗಳತ್ತ. ಮೊದಲಿಗೆ, ಬೆಂಗಳೂರು ವ್ಯಾಪ್ತಿಯಲ್ಲಿ ಬರುವ, ಕಾಂಗ್ರೆಸ್ಸಿನ ಭದ್ರಕೋಟೆ ಮತ್ತು ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದ ಸ್ಲಂನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಾಸ್ತವ್ಯ ಹೂಡಲಿದ್ದಾರೆ.