ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಿಕ್ತು ಮತ್ತೊಂದು ಬಿರುದು | FIlmibeat Kannada
  • 6 years ago
Kannada actor, Challenging star darshan Girinagar fans have decided to give 'Kala Sarvabhowma' title for D Boss.

ಇತ್ತೀಚೆಗಷ್ಟೇ ಸಾಹಿತಿ ಡಾ.ಕವಿರತ್ನ ವಿ.ನಾಗೇಂದ್ರ ಪ್ರಸಾದ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಶತಸೋದರಾಗ್ರಜಾ ಶರವೀರ' ಎಂದು ಹೊಸ ಬಿರುದು ನೀಡಿದ್ದರು. ಅದಕ್ಕೂ ಮುಂಚೆ 'ಕರುನಾಡ ಕರ್ಣ' ಎಂಬು ಹೆಸರನ್ನ ಅಭಿಮಾನಿಗಳು ನೀಡಿದ್ದರು. ಈಗ ಮತ್ತೊಂದು ಪವರ್ ಫುಲ್ ಬಿರುದನ್ನ ಅಭಿಮಾನಿಗಳು ನೀಡಲು ಮುಂದಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್, ದಾಸ, ಡಿ ಬಾಸ್, ಚಕ್ರವರ್ತಿ, ಕರುನಾಡ ಕರ್ಣ, ಬಾಕ್ಸ್ ಆಫೀಸ್ ಸುಲ್ತಾನ್, ಹೀಗೆ ಹತ್ತು ಹಲವಾರು ರೀತಿಯಲ್ಲಿ ಕರೆದು ದರ್ಶನ್ ಅವರ ಕೀರ್ತಿಯನ್ನ ಮತ್ತಷ್ಟು ಹೆಚ್ಚಿಸುತ್ತಿರುವ ಅಭಿಮಾನಿಗಳು ಈಗ ತಮ್ಮ ನೆಚ್ಚಿನ ಮುಡಿಗೆ ಮತ್ತೊಂದು ಕಿರೀಟ ನೀಡಿದ್ದಾರೆ.
Recommended