ಕರ್ನಾಟಕ ಚುನಾವಣೆ 2018 : ಗೌಡ್ರ ಟಾರ್ಗೆಟ್ ಕ್ಷೇತ್ರ ಶ್ರೀರಂಗಪಟ್ಟಣ | Oneindia Kannada

  • 6 years ago
Congress and JDS direct fight in Srirangapatna assembly constituency, Mandya. Ramesh Bandi Siddegowda Congress candidate and Ravindra Srikantaiah JDS candidate for constituency. Rajya Raitha Sangha leader K.S. Nanjunde Gowda may get BJP ticket in Karnataka Assembly Elections 2018.

ಕರ್ನಾಟಕದ ಅತ್ಯಂತ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ. ಇಡೀ ಪಟ್ಟಣವು ಕಾವೇರಿ ನದಿಯಿಂದಾಗಿರುವ ದ್ವೀಪದ ಪುಟ್ಟ ನಗರ. ಧಾರ್ಮಿಕ, ಸಾಂಸ್ಕೃತಿಕ ವಿಚಾರಗಳಿಂದಾಗಿ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡುವ ಕ್ಷೇತ್ರ.

ಶ್ರೀರಂಗಪಟ್ಟಣ ನೈಸರ್ಗಿಕವಾಗಿ ರಾಜ್ಯದ ಅತ್ಯಂತ ಸಂಪದ್ಭರಿತ ತಾಲೂಕುಗಳಲ್ಲಿ ಒಂದಾಗಿದೆ. ರಂಗನಾಥಸ್ವಾಮಿ ದೇವಾಲಯ, ರಂಗನತಿಟ್ಟು ಪಕ್ಷಿಧಾಮ, ನಿಮಿಷಾಂಬಾ ದೇವಾಲಯ, ಬಲಮುರಿ, ಎಡಮುರಿ, ದಾರಿಯಾದೌಲತ್ ಅರಮನೆ ಮುಂತಾದವುಗಳು ಕ್ಷೇತ್ರದ ಪ್ರಮುಖ ಪ್ರವಾಸಿ ಸ್ಥಳಗಳು.

ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. 1957ರಿಂದ 2013ರ ವರೆಗೂ ನಡೆದಿರುವ 14 ವಿಧಾನಸಭಾ ಚುನಾವಣೆಯಲ್ಲಿ 3 ಬಾರಿ ಕಾಂಗ್ರೆಸ್, 2 ಬಾರಿ ಪಕ್ಷೇತರರು, ಇನ್ನುಳಿದ 9 ಬಾರಿ ಜೆಡಿಎಸ್/ ಜನತಾದಳ / ಜನತಾಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

2018ರ ಚುನಾವಣೆಯಲ್ಲಿಯೂ ರಾಜ್ಯದ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರ. 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ನ ರಮೇಶ್ ಬಾಬು ಬಂಡಿಸಿದ್ದೇಗೌಡ ಗೆಲುವು ಸಾಧಿಸಿದ್ದರು.

Recommended