Karnataka bandh for Mahadayi : ಬೆಂಬಲಕ್ಕಿಂತ ಬೈಗುಳವೇ ಜಾಸ್ತಿ? | Oneindia Kannada

  • 6 years ago
ಬೆಂಗಳೂರು, ಜನವರಿ 25: ಕೇಂದ್ರ ಸರ್ಕಾರ, ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಇಂದು ನಡೆಯುತ್ತಿರುವ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸೇವೆಗಳು ಸ್ಥಗಿತಗೊಂದಿವೆ. ಖಾಸಗಿ ಶಾಲೆಗಳು ಮುಚ್ಚಿವೆ. ಬೆಂಗಳೂರಿನ ರಸ್ತೆಗಳಲ್ಲಿ ಅಲ್ಲಲ್ಲಿ ಕ್ಯಾಬ್, ಆಟೋಗಳು ಕಂಡುಬರುತ್ತಿವೆಯಾದರೂ ಸದಾ ಜಿಗಿಜಿಗಿ ಎನ್ನುವ ಬೆಂಗಳೂರಿನ ರಸ್ತೆಗಳು ಅಕ್ಷರಶಃ ಸ್ತಬ್ಧವಾಗಿವೆ.

ಕರ್ನಾಟಕ ಬಂದ್ ಟ್ವಿಟ್ಟರ್ ನಲ್ಲೂ ಟ್ರೆಂಡಿಂಗ್ ಆಗಿದ್ದು, ಹಲವರು ಬಂದ್ ಪರವಾಗಿ, ಮತ್ತಷ್ಟು ಜನ ಬಂದ್ ವಿರೋಧಿಸಿ ಟ್ವೀಟ್ ಮಾಡಿದ್ದಾರೆ. ನದಿ ನೀರಿನ ವಿವಾದ ರಾಜಕೀಯವಾಗುತ್ತಿದೆ ಎಂದು ಕೆಲವು ದೂರಿದ್ದರೆ, ಸರ್ಕಾರದ ಗಮನ ಸೆಳೆಯಲು ಇಂಥ ಬಂದ್ ಗಳು ಅನಿವಾರ್ಯ ಎಂದು ಮತ್ತಷ್ಟು ಜನ ಪ್ರತಿಕ್ರಿಯಿಸಿದ್ದಾರೆ.

Various pro kannada organisation and farmers called Karnataka Bandh on Jan 25th. Protester demand Prime minister Narendra Modi's intervention to solving Mahadayi issue. Here are twitter statements on Karnataka Bandh.

Recommended