2018ರಲ್ಲಿ ಬಾರಿ ಅಪಾಯಗಳ ಸೂಚನೆ | ಭವಿಷ್ಯ ನುಡಿದ ಪ್ರಕಾಶ್ ಅಮ್ಮಣ್ಣಾಯ | Oneindia Kananda

  • 6 years ago
Karnataka will witness Godhra kind of riot in 2018 and at the end of 2019 there is a war between India and Pakistan, astrology prediction by well known astrologer Prakash Ammannaya from Kapu, Udupi.

ಇದು ಯುದ್ಧದ ಮುನ್ಸೂಚನೆ. ಆತ್ಮರಕ್ಷಣೆಗಾಗಿ ಭಾರತ ನಡೆಸುವ ಮಹಾನ್ ಹೋರಾಟಕ್ಕೆ ಇಡೀ ಜಗತ್ತೇ ಸಾಕ್ಷಿಯಾಗುವ ಕಾಲ ಘಟ್ಟ ಅದು. ಮುಂದಿನ ಒಂದು ವರ್ಷದ ನಂತರ ಅಂದರೆ 2019ಕ್ಕೆ ಎದುರಾಗುವ ಆ ಸನ್ನಿವೇಶಕ್ಕೆ ಪೂರಕವಾಗಿ ಒಂದೊಂದೇ ಘಟನೆಗಳು ನಡೆಯುತ್ತಾ ಸಾಗುತ್ತಿವೆ. ಅದಕ್ಕೆ ಉದಾಹರಣೆ ಸಹಿತ ವಿವರಿಸಲಾಗಿದೆ. ಪಾಕಿಸ್ತಾನದ ಉದ್ಧಟತನ ದಿನದಿನಕ್ಕೂ ಹೆಚ್ಚುತ್ತಿರುವುದು, ಹಫೀಜ್ ಸಯೀದ್ ಅಲ್ಲಿನ ಚುನಾವಣೆ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿರುವುದು ಇವೆಲ್ಲವೂ ಆ ದೇಶಕ್ಕೆ ಬೀಳುವ ದೊಡ್ಡ ಹೊಡೆತದ ಮುನ್ಸೂಚನೆ. ಸದ್ಯಕ್ಕೆ ಧನು ರಾಶಿಯಲ್ಲಿ ಶನಿಯಿದ್ದು, ಮುಂದಿನ ವರ್ಷದ ಕೊನೆ ಭಾಗದ ಹೊತ್ತಿಗೆ ಪಾಕಿಸ್ತಾನದ ಜತೆಗಿನ ಯುದ್ಧವನ್ನು ಸೂಚಿಸುತ್ತಿದೆ.ಪಾಕಿಸ್ತಾನದ ಸೇನಾ ನಿರ್ಧಾರಗಳನ್ನು ಉಗ್ರಗಾಮಿಗಳೇ ತೆಗೆದುಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಲಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ಸ್ವಯಂ ರಕ್ಷಣೆಗಾಗಿ ದಂಡ ಕೈಗೆತ್ತಿಕೊಳ್ಳುವುದು ಭಾರತಕ್ಕೆ ಅನಿವಾರ್ಯ ಆಗುತ್ತದೆ. ಆಗ ದೇಶದ ಬೆಂಬಲಕ್ಕೆ ಅಮೆರಿಕ, ರಷ್ಯಾದಂಥ ರಾಷ್ಟ್ರಗಳು ನಿಲ್ಲಲಿದ್ದು, ಇಸ್ಲಾಮಾಬಾದ್ ಎಂಬುದೊಂದು ಇತ್ತೇ ಎಂದು ಪ್ರಶ್ನೆ ಮಾಡುವ ಸ್ಥಿತಿ ತಲುಪುತ್ತದೆ.

Recommended