ಯೋಗಿ ಆದಿತ್ಯನಾಥ್ ಮೇಲೆ ಮುಗಿಬಿದ್ದ ಸಿದ್ದರಾಮಯ್ಯ | Oneindia Kannada

  • 6 years ago
ಬೆಳಗಾವಿಯ ಕಾಂಗ್ರೆಸ್ ಸಮಾವೇಶದ ನಂತರ ಸಿದ್ದರಾಮಯ್ಯನವರು ಹುಬ್ಬಳ್ಳಿಗೆ ಆಗಮಿಸಿದಾಗ ಮಾಧ್ಯಮದವರೊಂದಿಗೆ ಯೋಗಿ ಆದಿತ್ಯನಾಥ್ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಈ ತಪರಾಕಿ ಸಾಕಾ ಇನ್ನೂ ಬೇಕಾ ಅಂತಾ ಕೇಳಿದರು. ಸಚಿವ ಅನಂತಕುಮಾರ ಹೆಗಡೆ ಗ್ರಾ.ಪಂ ಸದಸ್ಯ ಆಗೋದಕ್ಕೂ ಲಾಯಕ್ಕಿಲ್ಲದ ವ್ಯಕ್ತಿ. ಇಂತಹವರಿಂದ ದೇಶ ಉದ್ಧಾರವಾಗುತ್ತಾ?," ಎಂದು ಹರಿಹಾಯ್ದರು.ಇದಕ್ಕೂ ಮೊದಲುರಾಯಬಾಗದಲ್ಲಿ ಸಾಧನಾ ಸಮಾವೇಶದಲ್ಲಿ ಅವರು ಭಾಗವಹಿಸಿದರು. ಮುಖ್ಯಮಂತ್ರಿಗಳಿಗೆ ಖಡ್ಗ ನೀಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಸ್ವಾಗತ ಕೋರಲಾಯಿತು. ನಂತರ ಮಾತನಾಡಿದ ಅವರು, "ನಮ್ಮ ಕಾಂಗ್ರೆಸ್ ಸರಕಾರವು ಅಭಿವೃದ್ದಿಯತ್ತ ನಡೆಯುತ್ತಿದೆ. ಇಲ್ಲಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲ. ಆದರೂ ನಾನು ಎರಡು ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸವನ್ನು ಮಾಡಿದ್ದೇನೆ," ಎಂದು ಹೇಳಿದರು.ಇನ್ನು ಸಿದ್ದರಾಮಯ್ಯ ಯೋಗಿ ಆದಿತ್ಯನಾಥ್ ಮೇಲೂ ಹರಿಹಾಯ್ದಿದ್ದಾರೆ. ಯೋಗಿ ಆದಿತ್ಯನಾಥ್ ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಭೇಟಿ ಕೊಟ್ಟಿದ್ರು. ಹಾಗು ಹಿಂದೂಗಳ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದ್ರು. ಇದರಿಂದ ರೊಚ್ಚಿಗೆದ್ದ ಸಿದ್ದರಾಮಯ್ಯ ಯೋಗಿ ಆದಿತ್ಯನಾಥ್ ಬಗ್ಗೆ ಏನ್ ಹೇಳ್ತಾರೆ ಕೇಳಿ

Recommended